ರೈತರ ಹಾಡು

ದುಡಿಯುತಿಹರೂ ನಾವೆ
ಮಡಿಯುತಿಹರೂ ನಾವೆ

ಜಗಕೆ ಅನ್ನವ ನೀಡುತಿಹರು ನಾವೆ!
ತುತ್ತೊಂದು ಅನ್ನವನು ಬೇಡುತಿಹೆವು!
ನಿಮಗಾಗಿ ಜೀವನವ ಸವೆಸುತಿಹೆವು!

ಮೈಯ ದಂಡಿಪರಾವು
ರಕ್ತ ಹರಿಸುವರಾವು

ದಿನವು ಜನ್ಮವ ತೇಯುತಿಹರು ನಾವು!
ಧನಿಕರಿಗೆ ಹೊನ್ನ ಬಣ ಕೂಡಿಸಿಹೆವು
ಕುರುಡುಕಾಸಿನ ಭಿಕ್ಷೆ ಬೇಡುತಿಹೆವು!

ಭುವಿಯನುಳುವವರಾವು
ಭುವಿಗೆ ಉರುಳುವರಾವು

ಕಾಳ ಕೆತ್ತಿತ ಮಡಿವ ರೈತರಾವು
ತುತ್ತಿಲ್ಲದೆಯೆ ಹೆಣದ ರಾಸಿ ಬಿದ್ದಿಹುದು!
ಕಳಿತ ಹೆಣ, ಕೊಳೆತ ಹೆಣ-ಕೇಳ್ವರಾರು!

ಹಣದ ಕಣಜಗಳಾವು
ಹೆಣದ ವಂಶಜರಾವು

ಸಾವಿಲ್ಲದಿಹ ಅಮರ ಪ್ರೇತವಾವು
ಜೀವವಿಲ್ಲದ ಬರಿಯ ಮೂಳೆ ಮೂಟೆಗಳು!
ಹೊಟ್ಟೆ ಹಸಿವಿನ ಕೊರಗ ಕ್ರಾಂತಿಯೂಟೆಗಳು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮನಸಿನಾಳವು ಮಿಗಿಲು
Next post ಬ್ರಿಟೀಷ್ ಕಡಲ್ಗಾಲುವೆಯಲ್ಲಿ

ಸಣ್ಣ ಕತೆ

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

cheap jordans|wholesale air max|wholesale jordans|wholesale jewelry|wholesale jerseys